ಹರಿವು ಬಯಸಿದ ಒಂದಷ್ಟು ಹನಿಗಳು..

ಅದೇ ಅಂದು ಬಂದು ನಿಂತೆನಲ್ಲ ನಾನಲ್ಲಿ
ಕಣ್ತೆರೆಯುತಿರುವಂತೆ ನಿನ್ನ ನಗುವ ಎದುರಲ್ಲಿ
ಕಾಣುವುದೇ ಇಂದೂ ಆ ನನ್ನ ಮೊಗ
ನಿನ್ನ ಮನದಿ ಹರಿದುಹೋದ ತೆರೆಯಲ್ಲಿ…?
ಮಥಿಸಿ ಮಥಿಸಿ ಭಾವ,
ಬದುಕಿ ಬವಣಿಸುತಿಹುದೀ ಬಾಳು
ನಿನ್ನ ಬರದ ಬರೆಯಲ್ಲಿ …!

– – – – – – – – – – –

ಎಲ್ಲಿ ಕುಂತರೂ ಕಾಡುವ ನೆನಪ ಕರಿನೆರಳು
ಹಿಡಿಸಿಬಿಟ್ಟಿತೋ ಏನೋ ಮನಕೆ
ತಾ ಮರುಳು.!
ಮುನ್ನಡೆವ ಹಾದಿ ಮರೆಯಾಗುವಂತೆ
ಹಾಸಬಯಸಿದೆ ಗೊಳಲು..
ಕೊಟ್ಟು ಬಿಟ್ಟಿತೆ ಜೀವ, ಕಟ್ಟುಬಿದ್ದ ಯಾತನೆಗೆ ಸೋತು
ಉರುಳಿಗೆ ತಾ ಕೊರಳು…?!
– – – – – – – – – – –

ಅಳಿಸದಿರು ಈ ಉಸಿರ ಕವಿತೆಯನ್ನು
ನನ್ನ ಕಿವಿಯಲಿ ಅನುರಣಿಸುತಿರುವುದು
ನಿನ್ನ ದನಿಯ ಮರ್ಮರವೇ ಅಲ್ಲವೇನು..?
ಎರಚದಿರು ನೀ ಅಬ್ಬರಿಸಿ ಹನಿಯ ಕಿಡಿಯನ್ನು
ನಿನ್ನಿಂದಲೇ ಕವಿತೆಯ ಗುನುಗುತ,
ನಿನ್ನ ಸ್ಪೂರ್ತಿಯಿಂದಲೇ ಗೀಚುವವ ನಾನೇ ಅಲ್ಲವೇನು…!

– – – – – – – – – – – – – – –

ಕಳೆದ ಕಾಲದ ಮರಿಗೆಯೊಳಗೆ ನೆನಪನದ್ದಿ ಅದ್ದಿ..
ದೂರವಾಗುತ ಸಾಗಿದೆ ಕ್ಷಣ ಕನವರಿಕೆಯ ಅಲೆ ಎದ್ದಿ..
ಇಷ್ಟೆಲ್ಲ ಸಮಯ ಕಳೆಯಿತಾ ಎಂದು
ಧಿಗ್ಭ್ರಮಿತವಾಗಿದೆ ಮನ..
ನಸುನಗುತಲೇ ಅಣಕಿಸುತ ಮತ್ತೊಂದು ದಿನವ
ಮುಗಿಸಿಬಿಟ್ಟಿದೆ ಈ ಕವನ..!

– – – ರಾಘವೇಂದ್ರ ಹೆಗಡೆ.

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 08/06/2010, in ಹನಿಹರವು (ಕವಿತೆ) and tagged . Bookmark the permalink. 3 ಟಿಪ್ಪಣಿಗಳು.

  1. ರಾಘವೇಂದ್ರ ಅವರೇ…ನಿಮ್ಮ ಸಾಲುಗಳ ಭಾವಾರ್ಥ ಅಪೂರ್ವವಾಗಿದೆ…ಅದರಲ್ಲೂ
    ಕೊಟ್ಟು ಬಿಟ್ಟಿತೆ ಜೀವ, ಕಟ್ಟುಬಿದ್ದ ಯಾತನೆಗೆ ಸೋತು
    ಉರುಳಿಗೆ ತಾ ಕೊರಳು…?!
    ಇವಂತೂ ಬಹಳ ಇಷ್ಟವಾದ ಸಾಲುಗಳು

    Like

ಹೇಗಿದೆ ಹೇಳಿ!