ಹರಿವು ಬಯಸಿದ ಒಂದಷ್ಟು ಹನಿಗಳು..
ಅದೇ ಅಂದು ಬಂದು ನಿಂತೆನಲ್ಲ ನಾನಲ್ಲಿ
ಕಣ್ತೆರೆಯುತಿರುವಂತೆ ನಿನ್ನ ನಗುವ ಎದುರಲ್ಲಿ
ಕಾಣುವುದೇ ಇಂದೂ ಆ ನನ್ನ ಮೊಗ
ನಿನ್ನ ಮನದಿ ಹರಿದುಹೋದ ತೆರೆಯಲ್ಲಿ…?
ಮಥಿಸಿ ಮಥಿಸಿ ಭಾವ,
ಬದುಕಿ ಬವಣಿಸುತಿಹುದೀ ಬಾಳು
ನಿನ್ನ ಬರದ ಬರೆಯಲ್ಲಿ …!
– – – – – – – – – – –
ಎಲ್ಲಿ ಕುಂತರೂ ಕಾಡುವ ನೆನಪ ಕರಿನೆರಳು
ಹಿಡಿಸಿಬಿಟ್ಟಿತೋ ಏನೋ ಮನಕೆ
ತಾ ಮರುಳು.!
ಮುನ್ನಡೆವ ಹಾದಿ ಮರೆಯಾಗುವಂತೆ
ಹಾಸಬಯಸಿದೆ ಗೊಳಲು..
ಕೊಟ್ಟು ಬಿಟ್ಟಿತೆ ಜೀವ, ಕಟ್ಟುಬಿದ್ದ ಯಾತನೆಗೆ ಸೋತು
ಉರುಳಿಗೆ ತಾ ಕೊರಳು…?!
– – – – – – – – – – –
ಅಳಿಸದಿರು ಈ ಉಸಿರ ಕವಿತೆಯನ್ನು
ನನ್ನ ಕಿವಿಯಲಿ ಅನುರಣಿಸುತಿರುವುದು
ನಿನ್ನ ದನಿಯ ಮರ್ಮರವೇ ಅಲ್ಲವೇನು..?
ಎರಚದಿರು ನೀ ಅಬ್ಬರಿಸಿ ಹನಿಯ ಕಿಡಿಯನ್ನು
ನಿನ್ನಿಂದಲೇ ಕವಿತೆಯ ಗುನುಗುತ,
ನಿನ್ನ ಸ್ಪೂರ್ತಿಯಿಂದಲೇ ಗೀಚುವವ ನಾನೇ ಅಲ್ಲವೇನು…!
– – – – – – – – – – – – – – –
ಕಳೆದ ಕಾಲದ ಮರಿಗೆಯೊಳಗೆ ನೆನಪನದ್ದಿ ಅದ್ದಿ..
ದೂರವಾಗುತ ಸಾಗಿದೆ ಕ್ಷಣ ಕನವರಿಕೆಯ ಅಲೆ ಎದ್ದಿ..
ಇಷ್ಟೆಲ್ಲ ಸಮಯ ಕಳೆಯಿತಾ ಎಂದು
ಧಿಗ್ಭ್ರಮಿತವಾಗಿದೆ ಮನ..
ನಸುನಗುತಲೇ ಅಣಕಿಸುತ ಮತ್ತೊಂದು ದಿನವ
ಮುಗಿಸಿಬಿಟ್ಟಿದೆ ಈ ಕವನ..!
– – – ರಾಘವೇಂದ್ರ ಹೆಗಡೆ.
Posted on 08/06/2010, in ಹನಿಹರವು (ಕವಿತೆ) and tagged ಹನಿ - ಚೂರು. Bookmark the permalink. 3 ಟಿಪ್ಪಣಿಗಳು.
Super iddo
sakaatto sakattu
LikeLike
ರಾಘವೇಂದ್ರ ಅವರೇ…ನಿಮ್ಮ ಸಾಲುಗಳ ಭಾವಾರ್ಥ ಅಪೂರ್ವವಾಗಿದೆ…ಅದರಲ್ಲೂ
ಕೊಟ್ಟು ಬಿಟ್ಟಿತೆ ಜೀವ, ಕಟ್ಟುಬಿದ್ದ ಯಾತನೆಗೆ ಸೋತು
ಉರುಳಿಗೆ ತಾ ಕೊರಳು…?!
ಇವಂತೂ ಬಹಳ ಇಷ್ಟವಾದ ಸಾಲುಗಳು
LikeLike
santapa e puta sakat maga
LikeLike