ಕಥೆ ಹೇಳುವ ಮತ್ತೊಂದಿಷ್ಟು ಸಾಲುಗಳು. .
೧. ಬಹಳ ಹೊತ್ತು ಒಂದು ಸಾಲಿಗಾಗಿ ಯೋಚಿಸಿ ಕಡೆಗೆ ಬಂದ ವಿಷಯಗಳನ್ನು ಬಹಳ ತಲ್ಲೀನನಾಗಿ ಬರೆಯ ಹೊರಟ ಅವನಿಗೆ ಪೆನ್ನ ಇಂಕು ಮುಗಿದಿದ್ದೇ ತಿಳಿಯಲಿಲ್ಲವಂತೆ.!
೨. ಸಾಗಿಬಂದ ಹಾದಿಯ ಅವಲೋಕಿಸುತ್ತ ಸಾಕಷ್ಟು ಹಿನ್ನಡೆದಿದ್ದ ಆತನಿಗೆ ಮನೆಯ ಹಾದಿಯೇ ಮರೆತುಹೋಗಿತ್ತು.!
೩. ಆ ಅಪ್ರತಿಮ ಯುವ ಪ್ರತಿಭೆಯ ಚಿತ್ರಕಲೆ ಎಲ್ಲರ ಕಣ್ಣನ್ನು ಕುಕ್ಕಿದರೆ ಆತನ ಅಂಗವೈಕಲ್ಯದ ವಿಷಯದಲ್ಲಿ ಎಲ್ಲರೂ ಕುರುಡರಂತೆ ವರ್ತಿಸುತ್ತಿದ್ದರು.!
೪. ಬಾನಿಯೆಡೆ ಗೋವು ಬಂದರೆ ಓಡಿಸುತ್ತಾರೆ. ಅದರಲ್ಲಿ ನೀರು ತುಂಬಿಡುವುದರ ಉದ್ದೇಶ ಕೇವಲ ಅವರು ಕೈ-ಕಾಲು-ಮುಖ ತೊಳೆದುಕೊಳ್ಳಲು ಮಾತ್ರ!
೫. ಹಗಲಿಡೀ ಪರಿಸರ ಪ್ರೇಮಿಯೆಂದು ಫೋಸುಕೊಟ್ಟು ಭಾಷಣ ಮಾಡುವ ಆತ ರಾತ್ರಿಯಿಡೀ ಹಂದಿ, ಮತ್ತಿತರ ವನ್ಯಜೀವಿಗಳ ಬೇಟೆಗೆ ಗನ್ನು ಹಿಡಿದು ತಿರುಗುತ್ತಾನೆ.!
೬. ಸಾವಿನ ಸುತ್ತ ಸಾಕಷ್ಟು ಕತೆಗಳನ್ನು ಬರೆದ ಆತನ ಒಂದು ಕತೆ ಪ್ರಪ್ರಥಮ ಬಾರಿ ಪತ್ರಿಕೆಯೊಂದರಲ್ಲಿ ನಿನ್ನೆ ಪ್ರಕಟಗೊಂಡಿತ್ತು. ಇಂದು ಆತನೇ ಕೇವಲ ಒಂದು ಕಥೆಯಾಗಿ ಹದಿಮೂರನೇ ದಿವಸ!
Posted on 14/07/2010, in ಹನಿಗತೆ. Bookmark the permalink. 4 ಟಿಪ್ಪಣಿಗಳು.
Sakhat…
LikeLike
ನಮಸ್ತೆ ಸರ್.
ನನ್ನ ಬ್ಲಾಗಿಗೆ ಸ್ವಾಗತ ತಮಗೆ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
LikeLike
ಸಣ್ಣಕಥೆಯಾದರೂ ವರ್ಣನೆ,ವಿಷಯ,ಭಾವನೆ ದೊಡ್ಡ ಕಥೆಗಿಂಥಲೂ ದೊಡ್ದಗಾಗಿದೆ.
ಅಭಿನಂದನೆಗಳು.
LikeLike
ತುಂಬಾ ಚೆನ್ನಾಗಿವೆ ರಾಘವೇಂದ್ರ..
LikeLike