ತೂಫಾನ್
ಮೂರು ದಾರಿಗೋ
ನೂರು ಕಲ್ಲ ಕೊರೆತ
ಬೊಗಸೆ ಬೊಗಸೆಗೆ
ನಾಳೆಯ ಚೆಂದ ಸಂಗತ
ದಾರಿ ತೋರಲೂ, ಧಗಧಗಿಸಲೂ
ಸಾಕಾದ ಒಂಟಿಕಿಡಿ
ದಡದಿ ಮೂರೆಲೆಗೆ
ಉಸಿರ ಹಾಸುವ ಜಂಟಿಸುಳಿ
ನಿಂದು ಅಳತೆ ಬುದ್ದಿ
ನಾನೋ ವ್ಯಕ್ತ ಅಗೋಚರ
ನನ್ನ ಮೌನ ನಿನಗೆ ಉಪೇಕ್ಷೆ
ಓದಿ ಮರೆತೆಯಾ ಸಿದ್ದಾಂತ ಸಾಪೇಕ್ಷೆ?
ನಾನು ನಿಶ್ಚಲ, ನಾನು ನಿಶ್ಚಿತ
ನಾನು ನಿರಂತರ, ನಾನು ಸರ್ವಾಂತರ
ನೀ ಕಲಿತ ಭೌತಶಾಸ್ತ್ರದ
ವೇಘೋತ್ಕರ್ಷದಷ್ಟೇ ಅಲ್ಲ
ಸ್ಥಿತ್ಯಂತರಿಸಿ ಗತ್ಯಂತರಿಸಿ ಬರುವ
ನಾನು ಅಖಂಡ ಪ್ರಚನ್ನ ಅವತಾರ
ವರ್ತಮಾನದ ಭವಿಷ್ಯ ನಿರ್ಮಾಣ
ಭೂತ-ವರ್ತಮಾನಗಳ ನಿರ್ವಾಣ
ನಿನ್ನ ಆಟ ಯಾವ ಅಂಕೆ?
ನಾ ಸೋತಿರಬಹುದು,
ಈ ಕ್ಷಣ ಸತ್ತಿರಲೂಬಹುದು
ಆದರೆ ನೆನಪಿಡು
ನಾನು ಅವ್ಯಕ್ತ-ಸುಪ್ತ-ಲಿಪ್ತ
ಇರುಳ ಕಡೆದೋ
ಎಸಳ ನಾಭಿ ಸೀಳೋ
ಧೂಳ ಕಣ ಒಡೆದೋ
ಮತ್ತೆ ಮರುಹುಟ್ಟಿ
ಪುಟಿದೆದ್ದು ಬರುತ್ತೇನೆ ನೋಡು!
***
— ರಾಘವೇಂದ್ರ ಹೆಗಡೆ
Posted on 21/04/2012, in ಹನಿಹರವು (ಕವಿತೆ) and tagged acceleration, ಅಖಂಡ, ಅಗೋಚರ, ಅವ್ಯಕ್ತ, ಕವಿತೆ, ಕ್ಷಣ, ತೂಫಾನ್, ನಾಭಿ, ನಿರ್ಮಾಣ, ನಿರ್ವಾಣ, ಪ್ರಚನ್ನ, ಭವಿಷ್ಯ, ಭೌತಶಾಸ್ತ್ರ, ಲಿಪ್ತ, ವರ್ತಮಾನ, ವೇಗೋತ್ಕರ್ಷ, ವೇಘೋತ್ಕರ್ಷ, ಸಾಪೇಕ್ಷ, ಸುಪ್ತ, Earth Day, Physics. Bookmark the permalink. 8 ಟಿಪ್ಪಣಿಗಳು.
NICE ONE DUDE,
LikeLike
chintanege hachchuva kavana..chennagide
LikeLike
chennagide…saalugaLu chintanege hachchuttave
LikeLike
@ Sachin : Thank you 🙂
@ ವೇಣುವಿನೋದ್ ಸರ್ : ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ. ಆಗಾಗ ಈ ಕಡೆ ಬರುತ್ತಿರಿ . 🙂
@ ಸುಖೇಶ್ ಸರ್, @ ಪ್ರಮೋದ್ ಸರ್, @ ರಂಜಿತ್ ಸರ್
ಈ ಕವಿತೆಯನ್ನು ಲೈಕಿಸಿದ್ದಕ್ಕೆ ಧನ್ಯವಾದಗಳು! 🙂
LikeLike
ಇರುಳ ಕಡೆದೋ
ಎಸಳ ನಾಭಿ ಸೀಳೋ
ಧೂಳ ಕಣ ಒಡೆದೋ
ಮತ್ತೆ ಮರುಹುಟ್ಟಿ
ಬರಲಿ ಆ ಚೈತನ್ಯ .
ಸುಂದರ ಕವಿತೆ.
LikeLike
Thank You Madam ! 🙂
LikeLike
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” -ಗೋಪಾಲ ಕೃಷ್ಣ ಅಡಿಗ
LikeLike
ಅದು ಸಾರ್ವಕಾಲಿಕ ಸತ್ಯ ಅಲ್ವೇ ಸರ್!? 🙂
LikeLike